Wednesday, September 28, 2016

ವಾಹನ ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತ ಮೃತ್ಯು: ಪಂ. ಸದಸ್ಯನಿಗೆ ಗಂಭೀರ ಗಾಯ


ಮಂಜೇಶ್ವರ:(kannadaevision.in) ತೊಕ್ಕೋಟ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಮಂಜೇಶ್ವರ ಕಣ್ವತೀರ್ಥ ನಿವಾಸಿಯಾದ ಬಿಜೆಪಿ  ಕಾರ್ಯ ಕರ್ತರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಇವರ ಜತೆಗಿದ್ದ ಬಿಜೆಪಿ ನೇತಾರನಾದ ಪಂಚಾಯತ್ ಸದಸ್ಯ ಗಂಭೀರ ಗಾಯಗೊಂಡಿದ್ದಾರೆ.ಕಣ್ವತೀರ್ಥ ಕಾಂತಚ್ಚಿಲ್ ಶ್ರೀರಾಮ ಸೇವಾ ಭಜನಾ ಮಂದಿರ ಬಳಿಯ ನಿವಾಸಿ ದಿ| ಭೋಜ ದೇವಾಡಿಗ ಎಂಬವರ ಪುತ್ರ ಗಂಗಾಧರ.ಕೆ (೪೭) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಣ್ವತೀರ್ಥ ನಿವಾಸಿಯೂ ಮಂಜೇಶ್ವರ ಗ್ರಾಮ ಪಂಚಾಯತ್ ೧ನೇ ವಾರ್ಡ್ ಬಿಜೆಪಿ ಸದಸ್ಯನಾದ ಭಗವಾನ್‌ದಾಸ್ (೪೫) ಎಂಬವರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಭಗವಾನ್‌ದಾಸ್ ತೊಕ್ಕೋಟ್‌ನ ಅಂಬಿಕಾರೋಡ್‌ನಲ್ಲಿ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಸಂಸ್ಥೆ ನಡೆಸುತ್ತಿದ್ದಾರೆ. ಇವರ ಸಂಸ್ಥೆಗೆ ನಿನ್ನೆ ರಾತ್ರಿ ಸಾಮಗ್ರಿಗಳನ್ನು ತಲುಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇವರು ಗಂಗಾಧರರನ್ನು ಕರೆದುಕೊಂಡು ತನ್ನ ಬೈಕ್‌ನಲ್ಲಿ  ಅತ್ತ ತೆರಳಿದ್ದರು.  ಬಳಿಕ ರಾತ್ರಿ ೧೦.೩೦ರ ವೇಳೆ ಇವರು ಮರಳುತ್ತಿದ್ದಾಗ ತೊಕ್ಕೋಟ್  ಹೆದ್ದಾರಿಯ ಡಿವೈಡರ್ ಮೂಲಕ ಬೈಕ್ ತಿರುಗುತ್ತಿದ್ದಂತೆ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡ ಗಂಗಾಧರರನ್ನು ತೊಕ್ಕೋ ಟ್‌ನ ಆಸ್ಪತ್ರೆಗೆ ತಲುಪಿಸುತ್ತಿದ್ದಂತೆ ಅವರು ಮೃತಪಟ್ಟರು. ಅಪಘಾತದಲ್ಲಿ ಬೈಕ್ ಸಂಪೂ ರ್ಣ ನಜ್ಜುಗುಜ್ಜಾಗಿದ್ದು, ಢಿಕ್ಕಿ ಹೊಡೆದ ಕಾರು ಪಲ್ಟಿಹೊಡೆದಿದೆ.  ಅಪಘಾತ ತಕ್ಷಣ ಕಾರು ಚಾಲಕನನ್ನು ಅಲ್ಲಿ ಸೇರಿದವರು ಹಿಡಿದು ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಭಗವಾನ್‌ದಾಸ್ ಬೈಕ್ ಚಲಾಯಿಸಿದ್ದು, ಗಂಗಾಧರ ಹಿಂಬದಿ ಸವಾರನಾಗಿದ್ದರೆನ್ನಲಾಗಿದೆ.
ಕಣ್ವತೀರ್ಥದಲ್ಲಿ ಬಡಗಿ ವೃತ್ತಿ ನಡೆಸುತ್ತಿದ್ದ ಗಂಗಾಧರ ಬಿಜೆಪಿಯ ಸಕ್ರಿಯ ಕಾರ್ಯಕರ್ತನೂ, ಸಮಾಜಸೇವಕನೂ ಆಗಿದ್ದರು.  ಮೃತರು ತಾಯಿ ಚಂದ್ರಾವತಿ, ಪತ್ನಿ ರೇಖಾ, ಪುತ್ರ ದೀಪಕ್ (ಮಂಗಳೂರಿನಲ್ಲಿ ಪಿಯುಸಿ ವಿದ್ಯಾರ್ಥಿ), ಸಹೋದರ-ಸಹೋದರಿ ಯರಾದ ಶಿವದಾಸ್, ಸತೀಶ್, ರಾಜೇಶ್, ಗೀತ, ವಿನಯಾ ಭಾಸ್ಕರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಗಂಗಾಧರರ ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿರಿ ಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮನೆಗೆ ತಂದು ತಲಪಾಡಿ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸುವು ದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.
key words :Manjeshwara Accident death

No comments:

Post a Comment