Tuesday, October 4, 2016

ಕನ್ನಡ ಚಿಂತನೆ ಹಾಗೂ "ಸೀತಾಂತರಾಳ"


ಕಾಸರಗೋಡು:(kannadaevision.in)ಕನ್ನಡ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಹಾಗೂ ಅಪೂರ್ವಕಲಾವಿದರು ಕಾಸರಗೋಡು ಇದರ ಸಹಯೋಗದಲ್ಲಿ ದಿನಾಂಕ: 08-10-2016 ನೇ ಶನಿವಾರ, ಅಪರಾಹ್ನ 2.00 ಗಂಟೆಗೆ, ಪಿಲಿಕುಂಜೆಯ ಮುನ್ಸಿಪಲ್ ಕಾನ್ಫರೆನ್ಸ್ ಹಾಲ್ನಲ್ಲಿ ಜರಗಲ್ಲಿದೆ. ಮುಖ್ಯಅಥಿತಿಯಾಗಿ ಡಿ.ಕೆ.ರವಿಕುಮಾರ್(ಸಹಾಯಕ ನಿದರ್ೆಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು). ಹಾಗೂ ಅದ್ಯಕ್ಷರಾಗಿ ಶ್ರೀಮತಿ ಭಾರತಿಬಾಬು(ಕನರ್ಾಟಕ ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ ವಿಜೇತ ಕಲಾವಿದೆ) ಇವರು ಭಾಗವಹಿಸಲ್ಲಿದ್ದಾರೆ. ಶಶಿಧರ ಶೆಟ್ಟಿ(ಹೆಚ್ಚುವರಿ ತಹಶೀಲ್ದಾರರು,ಮಂಜೇಶ್ವರ ತಾಲೂಕು) ರವರ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದಲ್ಲಿ ರಂಗ ನಿದರ್ೆಶಕರು ಹಾಗೂ ನೀನಾಸಂ ಪದವಿಧರಾರೂ ಆದ ವೈ.ಡಿ.ಬದಾಮಿ ರವರು "ಕನ್ನಡ ರಂಗಭೂಮಿಯ ಸಮಕಾಲೀನ ಸ್ಥಿತಿಗತಿಗಳು" ಈ ವಿಷಯದ ಬಗ್ಗೆ ವಿಶೇಷೋಪನ್ಯಾಸ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ"ಸೀತಾಂತರಾಳ" ಎಂಬ ಕನ್ನಡ ನಾಟಕವು ಮಂಜುಳ ಬದಾಮಿ ಮತ್ತು ಬಳಗದವರಿಂದ ಜರಗಲಿದೆ. ಅಪೂರ್ವ ಕಲಾವಿದರು, ಕಾಸರಗೋಡು ಇದರ ಅದ್ಯಕ್ಷರಾದ ಉಮೇಶ್ ಎಂ.ಸಾಲಿಯಾನ, ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಬೆಂಗಳೂರು ಇದರ ಕಾರ್ಯದಶರ್ಿಯಾದ ಡಾ.ಕೆ.ಮುರಳಿಧರರವರು ಸರ್ವರಿಗೂ ಸ್ವಾಗತ ಬಯಸುತ್ತಾರೆ.
keyword: kannada-chinthana-and-seethantharala-at-kasaragod




No comments:

Post a Comment