Monday, October 3, 2016

ದಸರಾ ಪ್ರತಿಕೃತಿಗಳೊಂದಿಗೆ ಸೆಲ್ಫಿಗೆೆ ವಿದೇಶಿ ಪ್ರಯಾಣಿಕರು ದುಂಬಾಲು ವಿಮಾನ ನಿಲ್ದಾಣದಲ್ಲಿ ದಸರಾ ಸಾಂಸ್ಕೃತಿಕ ಮೆರಗು



ದೇವನಹಳ್ಳಿ :(kannadaevision.in) ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡ ನಂತರ ಪ್ರತಿ ವರ್ಷ ನಾಡಿನ ಸಾಂಸ್ಕೃತಿಕ ಪರಂಪರೆಯೊಂದಿಗೆ ದಸರಾ ಉತ್ಸವಕ್ಕೆ ಈ ಬಾರಿ ಅದ್ದೂರಿಯಾಗಿ ಚಾಲನೆ ನೀಡಿದೆ.

ರಾಜ್ಯದೆಲ್ಲೆಡೆ ದಸರಾ ನಾಡ ಹಬ್ಬಕ್ಕೆ ಮೈಸೂರು ಸೇರಿದಂತೆ ವಿವಿಧೆಡೆ ಚಾಲನೆಯಾಗುತ್ತಿದೆ. 9 ದಿನಗಳ ಸಂಭ್ರಮದಲ್ಲಿ ಬೆಂಗಳೂರು ಮೈಸೂರು ಸೇರಿದಂತೆ ವಿವಿಧ ರಾಜ್ಯಗಳಿಗೆ ತೆರಳಲು ಬಂದು ಹೋಗುತ್ತಿರುವ ವಿದೇಶಿಯರಿಗೆ ದಸರಾ ಹಬ್ಬದ ಸ್ವಾಗತ ನೀಡಲು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ.

ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಐಎಎಲ್ ಸಂಸ್ಥೆ ನಾಡಿನ ಇತಿಹಾಸ ಪರಂಪರೆ ಸಾರುವ ಸ್ಮಾರಕ, ಜನಪದ ನೃತ್ಯ ಪ್ರಕಾರಗಳ ಭಿತ್ತಿಚಿತ್ರಗಳಿಗೆ ದೀಪಾಲಂಕಾರ, ಲೇಸರ್‌ ಶೋ, ಅಳವಡಿಸಿದೆ. ಆ ಮೂಲಕ ದೇಶ, ವಿದೇಶಿಯರಿಗೆ ರೋಮಾಂಚನಗೊಳಿಸುತ್ತದೆ. ಇದನ್ನು ನೋಡಿದ ವಿದೇಶಿ ಪ್ರಯಾಣಿಕರು ನೃತ್ಯ ತಂಡದೊಂದಿಗೆ ಸೆಲ್ಫಿ ಛಾಯಾಚಿತ್ರಕ್ಕೆ ದುಂಬಾಲು ಬೀಳುತ್ತಿದ್ದಾರೆ.

ಎರಡು ಬಾರಿ ದೇಶದಲ್ಲೆ ಅತ್ಯುತ್ತಮ ಹಸಿರೀಕರಣ ವಿಮಾನ ನಿಲ್ದಾಣ ಪುರಸ್ಕಾರಕ್ಕೆ ಪಾತ್ರವಾಗಿರುವ ವಿಮಾನ ನಿಲ್ದಾಣ ಆವರಣದಲ್ಲಿ ಆನೆಯ ಮೇಲೆ ಅಂಬಾರಿ, ಮೈಸೂರು ಅರಮನೆಯಂತೆ  ಕಂಗೊಳಿಸುವಂತೆ ಮಾಡಿರುವ ವಿದ್ಯುತ್ ದೀಪಗಳ ಅಲಂಕಾರಗಳು ಎದ್ದು ಕಾಣುತ್ತಿವೆ.

ದತ್ತಣ್ಣ ಚಾಲನೆ:  ಚಿತ್ರನಟ ದತ್ತಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಜಿಲ್ಲಾಧಿಕಾರಿ ಪಾಲಯ್ಯ, ಕೆಐಎಎಲ್ ಸಂಸ್ಥೆ ನಿರ್ದೇಶಕ ಭಾಸ್ಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Keyword: dasara-celebration-airport

No comments:

Post a Comment